Hot Posts

6/recent/ticker-posts

ಬೆಳಗಾವಿ: ನೆಲಮಾಳಿಗೆಯಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಯುವಕ ಸಾವು.

 

ಬೆಳಗಾವಿ: ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ನಲ್ಲಿ ಸಂಗ್ರಹವಾಗಿದ್ದ ನೀರಿಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೃತರನ್ನು ಸೈಯದ್ ಫೆಮುದ್ದೀನ್ ಬದ್ರುದ್ದೀನ್ ಬುಖಾರಿ (ವಯಸ್ಸು 24, ಕಸಾಯಿ ಗಲ್ಲಿ ನಿವಾಸಿ, ಪ್ರಸ್ತುತ ಮರಾಠಾ ಕಾಲೋನಿಯ ಟಿಳಕವಾಡಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ) ಎಂದು ಗುರುತಿಸಲಾಗಿದೆ.

ಟಿಳಕವಾಡಿ ಪೊಲೀಸರು ನೀಡಿರುವ ಮಾಹಿತಿ ಏನೆಂದರೆ, ಅಕ್ಟೋಬರ್ 8ರಿಂದ 11ರ ನಡುವೆ ಸೈಯದ್ ಫೆಮುದ್ದೀನ್ ಅಪಾರ್ಟ್ ಮೆಂಟ್ ನ ಬೇಸ್ ಮೆಂಟ್ ಗೆ ಹೋಗಿದ್ದರು. ಇಲ್ಲಿ ಕಾಲು ಜಾರಿ ಅಥವಾ ಇನ್ನಾವುದೋ ಕಾರಣದಿಂದ ನೀರಿಗೆ ಬಿದ್ದಿದ್ದಾನೆ. ಇದರಲ್ಲಿ ಸಾವನ್ನಪ್ಪಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ಪರಶುರಾಮ ಪೂಜೇರಿ ತನಿಖೆ ನಡೆಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು