ಈ ಬಾರಿ ನಾವು ಮುಂಬೈ ಕ್ರೈಂ ಬ್ರಾಂಚ್ನಿಂದ ಮಾತನಾಡುತ್ತಿದ್ದೇವೆ. ಅಪರಾಧಿಯೊಬ್ಬರು ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದಿದ್ದು, ಅದರಲ್ಲಿ ಹಲವು ಅಕ್ರಮ ವಹಿವಾಟು ನಡೆದಿದೆ. ನಿಮ್ಮ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ನಿಮ್ಮನ್ನೂ ತನಿಖೆಗೆ ಒಳಪಡಿಸಬೇಕೆಂದರು. ತನಿಖೆ ಪೂರ್ಣಗೊಳ್ಳುವವರೆಗೆ ನೀವು ನಮ್ಮ ಬಳಿ 30 ಲಕ್ಷ ಭದ್ರತಾ ಠೇವಣಿ ಇರಿಸಬೇಕಾಗುತ್ತದೆ. ತನಿಖೆಯ ನಂತರ ನೀವು ತಪ್ಪಿತಸ್ಥರಲ್ಲ ಎಂದು ಕಂಡುಬಂದರೆ, ನಿಮ್ಮ ಹಣವನ್ನು ಹಿಂತಿರುಗಿಸಲಾಗುತ್ತದೆ, ಇಲ್ಲದಿದ್ದರೆ ಅದನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಭಯಪಡುತ್ತಾರೆ.
ಆತನಿಗೆ ಹೆದರಿ ಸಂಬಂಧಪಟ್ಟ ಅಧಿಕಾರಿ ಬ್ಯಾಂಕ್ ಖಾತೆಗೆ ₹ 30 ಲಕ್ಷ ಜಮಾ ಮಾಡಿದ್ದಾರೆ. ಇದಾದ ಬಳಿಕ ಸಂಬಂಧಪಟ್ಟವರು ಸಂಪರ್ಕ ಕಡಿದುಕೊಂಡಿದ್ದಾರೆ. ವಂಚನೆಗೆ ಒಳಗಾಗಿರುವುದನ್ನು ಮನಗಂಡ ಸಂಬಂಧಪಟ್ಟ ಅಧಿಕಾರಿ ಭಾನುವಾರ ಸಿಇಎನ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ. ಸಿಇಎನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 ಕಾಮೆಂಟ್ಗಳು